Sunday 3 December 2017

ವಿಶ್ವ ಶಾಂತಿ ಹಾಗೂ ಭಾತೃತ್ವದ ಶೃಂಗ ಸಭೆ
SDM COLLEGE MANGALORE
ಕವಿಗೋಷ್ಟಿ:

೧. ಹುಚ್ಚು

ಧರ್ಮಗಳ ತಿರುಳನರಿಯದೇ
ಶ್ರೇಷ್ಠತೆಯ ವ್ಯಸನಕ್ಕಿಳಿದ ಜನ
ಗಡಿ ಗಡಿಗಳ ನಡುವೆ
ಹಚ್ಚಿದರು ಕಿಚ್ಚು;
ಯಾವುದರ ಪರಿವೇ ಇಲ್ಲದೇ
ಗಡಿಗಳ ನಡುವೆ ಹುಟ್ಟಿ
ನಗುವ ಹೂವಿಗೆ ಮಾತ್ರ
ಶಾಂತಿಯ ಹುಚ್ಚು?

೩.ಭರವಸೆ

ಕೋಟಿ ತಾರೆ ಹೊಳೆದರೂ
ಬಾನಿನಲ್ಲಿ
ಜೀವಜಾಲಕ್ಕೆ
ಸೂರ್ಯನೊಬ್ಬನೇ ಬೆಳಕು
ಮತ ಧರ್ಮಗಳೆಷ್ಟಿದ್ದರೂ
ಜಗದಲ್ಲಿ
ಶಾಂತಿ ಮಂತ್ರಕ್ಕೆ
ಮಾನವತೆಯೊಂದೇ ಮಿಣುಕು

೩. ಧ್ಯೇಯ

ಸಾಲಾಗಿ ಹಚ್ಚಿಟ್ಟ ದೀಪಗಳು
ಸೂಸುವ ಬೆಳಕೊಂದೇ
ಶಾಂತ ಶೀತಲ;
ಗುರುವಾಗಿ ಹುಟ್ಟಿದ ಧರ್ಮಗಳು
ಹೇಳುವ ಆಶಯವೂ ಒಂದೇ
ಶಾಂತಿ ಸಕಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment