ಹೆಚ್ಚು ದಿನಗಳಿಲ್ಲ,
ಇನ್ನೇನು ಬಂದೇ ಬಿಟ್ಟಿತು ನೋಡಿ
ಕಾಲನ ಮಾಗಿ.
ಚಿಗುರಿ ನಳನಳಿಸಿ
ಹಣ್ಣುಬಿಟ್ಟ ಗೊಂಚಲು ತೊನೆದು
ಕೊಟ್ಟು ಕೊಟ್ಟೂ ಬರಿದಾಗಿ
ತೊಟ್ಟು ಕಳಚುವ ದಿವ್ಯ ಕಾಲ.
ಸುಲಭವಲ್ಲ,
ಸುರಿಸುರಿದು ಖಾಲಿಯಾಗುತ್ತಾ
ಮೋಹ ಕಳಚಿ
ಬಯಲಿನಲ್ಲಿ ನಿಲ್ಲುವುದು.
ಮುಸುಕುವ ಮಂಜಿನ ಎದುರೂ
ನಿಲ್ಲುವುದೇ ಇಲ್ಲ;
ನಿರಂತರ ಸುರಿವ ಮಳೆಯ ಸೆಳೆತ!
ಮಾಗಿ ಬರುವ ಮುನ್ನ
ಮಾಗಬೇಕು ಇಲ್ಲಿ;
ಬಾಗಿ ಹೊಸ ಬೀಜಕ್ಕೆ
ಒಲುಮೆಯ ನೀರೆರೆದು
ಚಿಗುರ ಕಂಡು ಸಂಭ್ರಮಿಸಬೇಕಿಲ್ಲಿ.
ಅದುವೇ ಬದುಕ ಮಗ್ಗಿ;
ನಿಜದ ಸುಗ್ಗಿ!
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಇನ್ನೇನು ಬಂದೇ ಬಿಟ್ಟಿತು ನೋಡಿ
ಕಾಲನ ಮಾಗಿ.
ಚಿಗುರಿ ನಳನಳಿಸಿ
ಹಣ್ಣುಬಿಟ್ಟ ಗೊಂಚಲು ತೊನೆದು
ಕೊಟ್ಟು ಕೊಟ್ಟೂ ಬರಿದಾಗಿ
ತೊಟ್ಟು ಕಳಚುವ ದಿವ್ಯ ಕಾಲ.
ಸುಲಭವಲ್ಲ,
ಸುರಿಸುರಿದು ಖಾಲಿಯಾಗುತ್ತಾ
ಮೋಹ ಕಳಚಿ
ಬಯಲಿನಲ್ಲಿ ನಿಲ್ಲುವುದು.
ಮುಸುಕುವ ಮಂಜಿನ ಎದುರೂ
ನಿಲ್ಲುವುದೇ ಇಲ್ಲ;
ನಿರಂತರ ಸುರಿವ ಮಳೆಯ ಸೆಳೆತ!
ಮಾಗಿ ಬರುವ ಮುನ್ನ
ಮಾಗಬೇಕು ಇಲ್ಲಿ;
ಬಾಗಿ ಹೊಸ ಬೀಜಕ್ಕೆ
ಒಲುಮೆಯ ನೀರೆರೆದು
ಚಿಗುರ ಕಂಡು ಸಂಭ್ರಮಿಸಬೇಕಿಲ್ಲಿ.
ಅದುವೇ ಬದುಕ ಮಗ್ಗಿ;
ನಿಜದ ಸುಗ್ಗಿ!
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
No comments:
Post a Comment