Sunday 3 December 2017

ನಮ್ಮ ಭಾರತ ಕೇವಲ ದೇಶವಲ್ಲ
ವಿಶ್ವದಿ ಪುಟಿಯುವ ಶಕ್ತಿ
ಈ ಭೂಮಿಯು ಬರಿಯ ಮಣ್ಣಲ್ಲ
ಮೋಕ್ಷವ ತೋರುವ ದೀಪ್ತಿ

ಇಲ್ಲಾಡುವ ಭಾಷೆಯು ನುಡಿಯಲ್ಲ
ಶಾಂತಿಯ ಪಠಿಸುವ ಮಂತ್ರ
ಇಲ್ಲಿರುವುದು ಕೇವಲ ಬದುಕಲ್ಲ
ಸಗ್ಗಕೆ ನಡೆಸುವ ಯಂತ್ರ

ಹರಿಯುವ ನದಿ ಬರಿ ನೀರಲ್ಲ
ಪಾಪವ ಕಳೆಯುವ ತೀರ್ಥ
ರಾಷ್ಟ್ರೀಯತೆ ಬರಿಯ ಘೋಷವಲ್ಲ
ಸಮತೆಯ ಸಾರುವ ಸೂತ್ರ

ಸ್ವಾತಂತ್ರ್ಯದ ಹಿಂದಿರುವ ತ್ಯಾಗ ಬಲಿದಾನಗಳನ್ನು ಮರೆಯದೇ ಇಂದಿನ ದಿನವನ್ನು ಹಬ್ಬವಾಗಿಸೋಣ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment