Sunday 3 December 2017

ನಿನ್ನಂತೆಯೇ ನಾನೂ ಕೆಲಸದಲ್ಲಿ
ತೊಡಗಿದೆ ಅವಿರತ;
ಎರಡು ದಿನಕ್ಕಿಂತ ಮುಂದೆ ಸಾಗಲಿಲ್ಲ
ಕಾಯಕದ ರಥ.

ನಿನ್ನಂತೆಯೇ ನಾನೂ ಯೋಚಿಸಿದೆ
ದೇಶಕ್ಕಾಗಿ ಕ್ಷಣಕ್ಷಣ;
ಕೀರ್ತಿಶನಿ ಲಾಲಸೆಯ ಕಾಂಚಾಣ
ಕುಣಿಸಿತು ಝಣಝಣ.

ಸಂಸಾರದ ಜೋಡಿ ಕಣ್ಣುಗಳ ಆಸೆಯ
ಬಲೆಯಲ್ಲೇ ನಾನು ಸೀಮಿತ;
ಸಾಗರದ ಕೋಟಿ ಕಣ್ಣುಗಳ ನಿರೀಕ್ಷೆಯ
ಭಾರದಲ್ಲೂ ನೀನು ಮಂದಸ್ಮಿತ.

ಹೆಜ್ಹೆಗಳ ಆರಂಭವಷ್ಟೇ;
ಏರಲಿದೆ ಬೆಟ್ಟದಷ್ಟು.

ದೇವರ ಆಶೀರ್ವಾದ ನಿಮಗಿರಲಿ
ನನ್ನ ನೆಚ್ಚಿನ ಪ್ರಾಧಾನಿಗೆ
ಹುಟ್ಟು ಹಬ್ಬದ ಶುಭಾಶಯಗಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment