Saturday 26 March 2016

ಯಾವ ರಾಗ ಬೆರೆಸಲಿ ನಾ
ನೀನು ಬರೆದ ಕವಿತೆಗೆ;
ತುಮುಲ ತೆರೆಯ ಮೀರಿ ಸೆಳೆವ
ನಿಂತ ನೀರ ಬದುಕಿಗೆ.

ನೀನೆಂದು ಕೈಗೆ ಸಿಗದ
ಕಣ್ಣ ಸೆಳೆವ ಮಿನುಗುತಾರೆ;
ಬೆಳಕ ಸುರೆಯ ನಶೆಯೇರಿಯೂ
ಅರಳದಿರುವ ಕೆಂದಾವರೆ.
ಮೆರೆವ ಸಂತಸ, ಮನದಿ ವೇದನೆ
ಯಾಕೋ ಏನೋ ಅರಿಯೆನು.

ನಗುವ ಕಳ್ಳ ಭಾವದಲೆ
ಅಳುವ ಕಡಲ ಮೊರೆತದ ಹಾಡು;
ಬಯಸಿ ಮಿಡಿದ ವೀಣೆಯಲಿ
ಹರಿದ ತಂತಿ ಬಿಗಿಯುವರಾರು?
ಚೆಲುವ ಬಣ್ಣ, ತೆರೆಯೆ ಕಣ್ಣು
ಎಂದೋ ನಾನು ಅರಿಯೆನು.

ಒಡೆದ ಹಾಲ ಕಣಕಣದಲ್ಲೂ
ಹುಳಿಕಾರುವ ವಿರಸದ ಸಿಂಧು;
ಬೆರೆವ ಮನದ ಆಸೆಯಲ್ಲೂ
ಬೇರೆ ನಿಂತ ನೀರ ಬಿಂದು
ಮಾತು ಬೇಡಿದೆ, ಮೌನ ಕಾಡಿದೆ
ಬೆಸೆವ ದಾರಿಯ ಅರಿಯೆನು.


ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Thursday 10 March 2016

ಕಾಲೇಜು ಜೀವನ ನನ್ನ ಬದುಕಿನಲ್ಲಿ ಅತ್ಯ೦ತ ಸ೦ಭ್ರಮದ ಲವಲವಿಕೆಯ ದಿನಗಳು. ಅದು ಕಾಲೇಜು ಬದುಕಿನ ಕೊನೆಯ ದಿನಗಳು. ಇಡೀ ಕಾಲೇಜು "ಕಾಲೇಜ್ ಡೇ" ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಎಲ್ಲಾ ವಿಭಾಗಗಳಿ೦ದ ಅಗತ್ಯವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದು ಮತ್ತು ವಿಜೇತರಿಗೆ ಪ್ರಾ೦ಶುಪಾಲರಿ೦ದ ಆಕರ್ಷಕ ಬಹುಮಾನ ವಿತರಣೆ ಹಿ೦ದಿನಿ೦ದಲೂ ನಡೆದು ಬ೦ದಿದ್ದ ಸ೦ಪ್ರದಾಯ. ಬಹುಮಾನವನ್ನು ಪಡೆಯುವುದು ವಿಧ್ಯಾರ್ಥಿಗಳಿಗಲ್ಲದೇ ಆಯಾಯ ವಿಭಾಗದ ಅಧ್ಯಾಪಕರಿಗೂ ಪ್ರತಿಷ್ಟೆಯ ವಿಷಯವಾಗಿತ್ತು. ಹಾಗಾಗಿ ನಮ್ಮ ವಿಭಾಗದ ಮೇಲೂ ಹೆಚ್ಛಿನ ಒತ್ತಡ ಇತ್ತು. ಹಾಡು, ನೃತ್ಯಗಳಿಗೆ ಹೇಳಿದ ವಿಭಾಗ ನಮ್ಮದಲ್ಲ. ಆದ್ದರಿ೦ದ ಒ೦ದು ಸಣ್ಣ ಸ್ಕಿಟ್ ಮಾಡುವುದೆ೦ದು ತೀರ್ಮಾನಿಸಲಾಯ್ತು.

ಬಾರಿ ಒ೦ದು ರಾಜಕೀಯ ಚುಣಾವಣಾ ಪ್ರಚಾರದಲ್ಲಿ ಕೊಡುವ ಸುಳ್ಳು ಭರವಸೆಯನ್ನು ಹಾಸ್ಯ ಮಿಶ್ರಿತ ಶೈಲಿಯಲ್ಲಿ ಪ್ರಸ್ತುತಪಡಿಸುವ ಸಣ್ಣ ನಾಟಕ ಮಾಡುವುದೆ೦ದು ನಮ್ಮ ನಾಟಕ ತ೦ಡ ನಿರ್ಧರಕ್ಕೆ ಬ೦ತು.ನಾಟಕದ ರೂಪುರೇಷೆಗಳನ್ನು ಹಗಳಿರುಳು ಚರ್ಚಿಸುತಿದ್ದೆವು. ಮುಖ್ಯ ಭೂಮಿಕೆಯಲ್ಲಿ ರಾಜಕೀಯ ನೇತಾರನೊಬ್ಬ ನೆರೆದ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುತ್ತಾನೆ. "ನನ್ನನ್ನು ಗೆಲ್ಲಿಸಿ, ನಾನು ಆರಿಸಿ ಬ೦ದರೆ ಬಡತನವನ್ನು ಭಾರತದ ಭೂಪಟದಿ೦ದಲೇ ಅಳಿಸಿ ಹಾಕುತ್ತೇನೆ. ಎಲ್ಲರೂ ಸುಳ್ಳು ಭರವಸೆಯನ್ನು ಜನತೆಗೆ ನೀಡುತ್ತಾರೆ, ಆದರೆ ನಾನು ಹಾಗಲ್ಲ. ಹೇಳಿದ್ದನ್ನೇ ಮಾಡಿತೋರಿಸುತ್ತೇನೆ. ಅದೂ ಈಗಲೇ, ಸಭೆಯಲ್ಲೇ" ಅನ್ನೋದು ನಾಟಕದ ಪ್ರಮುಖ ಡಯಲಾಗ್. ಇದನ್ನು ಸ್ಟೇಜ್ ನಲ್ಲೇ ವಿಭಿನ್ನವಾಗಿ, ಹಾಸ್ಯಮಯವಾಗಿ ಮಾಡಿತೋರಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಹೇಗೆ ಅ೦ತ ಯಾರಿಗೂ ಹೊಳೆಯುತ್ತಿರಲಿಲ್ಲ.


ಆಗ ಅಲ್ಲಿಗೆ ನಮ್ಮ ಐಡಿಯಾ ಹರೀಶ್ ಬ೦ದ.ನಮ್ಮ ಗೆಳೆಯರ ಬಳಗದಲ್ಲಿದ್ದ ಹರೀಶ್ ಐಡಿಯಗಳ ಆಗರ. ಐಡಿಯ ಅನ್ನೋ ಮಾತಿಗೆ ಅನ್ವರ್ಥನಾಮ ಎ೦ದು ಅವನನ್ನು ಚುಡಾಯಿಸುತಿದ್ದರೂ ಅವನ ಹೆಚ್ಚಿನ ಐಡಿಯಾಗಳು ಫ್ಲಾಪ್ ಆಗುತ್ತಿದ್ದರೂ ಅವನು ಐಡಿಯ ಕೊಡುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಅವ್ನು ಸ್ವಲ್ಪ ಯೊಚಿಸಿದ೦ತೆ ಮಾಡಿ ಕ್ಲಾಸ್ ನಲ್ಲಿದ್ದ ಕಪ್ಪು ಬೋರ್ಡ್ ನ್ನು ಅದರ ಸ್ಟ್ಯಾ೦ಡ್ ಸಹಿತ ತರಿಸಿಕೊ೦ಡ. ಏನು ಮಾಡುತ್ತಾನೆ ಎ೦ದು ನಾವೆಲ್ಲಾ ಪರಮ ಕುತೂಹಲದಿ೦ದ ನೋಡುತಿದ್ದೆವು. ಅವನು ಬೋರ್ಡ್ ನಲ್ಲಿ ಅ೦ದವಾಗಿ ಭಾರತದ ಭೂಪಟವನ್ನು ಬಿಡಿಸಿದ.ನ೦ತರ ಅದರಲ್ಲಿ "ಬಡತನ" ಅ೦ತ ಬರೆದು ಬೋರ್ಡ್ ಗೆ  ಎಳೆಯುವ  ಪರದೆಯನ್ನು ಕಟ್ಟಿದ ಮತ್ತು ಹೇಳಿದ, "ರಾಜಕಾರಣಿ ಬಡತನವನ್ನು ಭಾರತದ ಭೂಪಟದಿ೦ದ ಈಗಲೇ ಅಳಿಸಿ ಹಾಕುತ್ತೇನೆ ಎ೦ದು ಹೇಳಿದ ನ೦ತರ ಬೋರ್ಡ್ ಹತ್ತಿರ ಬ೦ದು ಪರದೆಯನ್ನು ಸರಿಸಿ ಡಷ್ಟರ್ ನಿ೦ದ ಭೂಪಟದಲ್ಲಿ ಬರೆದಿರುವ ಬದತನ ವನ್ನು ಅಳಿಸಿ ಹಾಕುವುದು ಮತ್ತು ಜನತೆಗೆ ಬದತನವನ್ನು ನಿಮ್ಮ ಎದುರಿನಲ್ಲೇ ಅಳಿಸಿ ಹಾಕಿದ್ದೇನೆ, ನನ್ನನ್ನು ಆರಿಸಿ ಎ೦ದು ಹೇಳುವುದು " ಎ೦ದಾಗ ಪ್ರಚ೦ಡ ಕರತಾಡನ ಮೊಳಗಿತು. ಮು೦ದೆ ಇದೇ ಐಡಿಯದಿ೦ದ ನಾಟಕ ಪ್ರದರ್ಶನಗೊ೦ಡಾಗ ನೋಡುತ್ತಿದ್ದ ಎಲ್ಲರೂ ಹೊಟ್ಟೆಹುಣ್ಣಾಗುವ೦ತೆ ನಕ್ಕಿದ್ದನ್ನು ನಾನು ಈಗಲೂ ಮರೆತಿಲ್ಲ. ಮೊದಲ ಬಹುಮಾನ ನಮಗೇ ಸಿಕ್ಕಿ ಐಡಿಯಾ ಹರೀಶನ ಹೆಸರು ಕಾಲೇಜ್ ನಲ್ಲಿ ಸಕ್ಕತ್ ಜನಪ್ರಿಯಗೊ೦ಡು ಅವನ ಐಡಿಯಾಗಳಿಗೆ ಭಾರೀ ಬೇಡಿಗೆ ಬ೦ತು

Friday 4 March 2016

ಅಪ್ಪ ಮತ್ತು ಬಸಳೆ 


ªÀÄ£ÉAiÀÄ ªÀÄÄ0¢£À JgÀqÀÄ PÉÆAiÀÄÄè ¨sÀvÀÛzÀ UÀzÉÝAiÀÄ°è C¥Àà §¸À¼É £ÉqÀÄvÁÛgÉ.
¥Àæwà ¸À® £ÉqÀĪÀ ªÉÆzÀ®Ä "ªÀÄÄ0¢£À ¸À® £ÉqÉÆÃzÉà E®è, EzÉà PÉÆ£É" C0vÁ£Éà ºÉý ªÀÄÄ0zÀĪÀgÉAiÀÄĪÀÅzÀÄ CªÀgÀ ºÀ¼ÉAiÀÄ qÉʯÁUï. ¨É½UÉÎ JzÀÄÝ SÁ° ºÉÆmÉÖAiÀÄ°è ZÁ PÀÄrzÀgÉ ªÀÄvÉÛ ºÉÆÃUÀĪÀÅzÀÄ CzÉà UÀzÉÝAiÀÄ°è. £ÉlÖ §¸À¼É §½î aUÀÄj ¸Àé®à vÀ¯É ªÉÄÃ¯É ªÀiÁrzÀÄzÀÄ PÀ0qÀgÉ ¸ÁPÀÄ, CzÀPÉÌ ZÀ¥ÀàgÀ ºÁQ ªÉÄÃ¯É ©qÀĪÀ DvÀÄgÀ. CzÀPÁÌVAiÉÄà PÀnÖUÉ, CrPÉ ªÀÄgÀzÀ zÀ¨ÉâUÀ¼ÀÄ, PÀlÖ®Ä ºÀÄjºÀUÀÎ CxÀªÁ ¨Á¼É VqÀzÀ ºÉÆgÀV£À £ÁgÀÄ J®èªÀ£ÀÆß MlÄÖ ªÀiÁqÀĪÀÅzÀÄ CªÀgÀ ªÉÆzÀ® CeÉð0n£À PÉ®¸À. CzÀÄ MªÉÄä MmÁÖ¬ÄvÉÆà £À0vÀgÀ CªÀjUÉ ©¹®Ä, ZÁ w0rAiÀÄ £É£À¥Éà DUÉÆâ®è. M¼Éîà ªÀÄzÀĪÉUÉ ZÀ¥ÀàgÀ ºÁPÀĪÁV£À ªÀÄÄvÀĪÀfð¬Ä0zÀ ¸À0¨sÀæªÀÄ¢0zÀ CµÉÖà ZÀ0zÀzÀ ZÀ¥ÀàgÀ gÉr DUÀĪÀÅzÀÄ JgÀqÀÄ ªÀÄÆgÀÄ
¢£ÀUÀ¼À M¼ÀUÉÃ. £À0vÀgÀ D JgÀqÀÆ §¢UÀ½0zÀ §¸À¼ÉAiÀÄ£ÀÄß ZÀ¥ÀàgÀzÀ EPÉÌ®UÀ¼À zÀ¨ÉâUÀ½UÉ PÀnÖ §¸À¼É §½îUÉ D¸ÀgÉ MzÀV¹ ZÀ¥ÀàgÀzÀ PÀqÉ ªÀÄÄR ªÀiÁr¸ÀĪÀÅzÀÄ; E¢µÁÖzÀgÉ CªÀgÀ°è M0zÀÄ vÉgÀzÀ £ÉªÀÄä¢. DzÀgÉ CµÀÖgÀ vÀ£ÀPÀ F J¯Áè PÁAiÀÄðPÀæªÀÄUÀ¼À vÉgɪÀÄgÉAiÀÄ°è PÁtzÀ PÉÊUÀ¼À PÁtÂPÉ EzÀÄÝ , CzÀÄ CªÀÄä£ÀzÀÄÝ J0zÀÄ ¤ªÀÄä HºÉ DVzÀÝgÉ CzÀÄ ±ÉÃPÀqÁ £ÀÆgÀgÀµÀÄÖ ¸ÀvÀå.ªÀÄ£É PÉ®¸ÀzÀ £ÀqÀÄªÉ F ZÀ¥ÀàgÀ ¸ÉÃªÉ PÀÆqÁ CªÀjUÉ C¤ªÁAiÀÄð.

¢£Á ¨É¼ÀUÉÎzÀÄÝ §¸À¼ÉUÉ ¤ÃgÀÄ ©qÀĪÀÅzÀÄ, ºÀÄ®Äè QüÀĪÀÅzÀÄ CªÀgÀ ªÀÄÄRå ¢£ÀZÀj. ºÀnÖAiÀÄ ¸ÁªÀAiÀĪÀ UÉƧâgÀ ©lÖgÉ ¸ÀÄ¥sÀ® M0zÀ£ÀÄß ¥ÉÃmÉAiÀÄ ¥ÁnîgÀ C0UÀr¬Ä0zÀ vÀ0zÀÄ ºÁPÀĪÀÅzÀÄ EzÉ. QÃl£Á±ÀPÀ C0vÀÆ §¼À¸ÀĪÀÅzÉà E®è. ºÁUÀ0vÀ ºÀļÀUÀ¼À G¥ÀzÀæ E®èªÉà C0vÀ ¤ÃªÀÅ PÉüÀ§ºÀÄzÀÄ. R0rvÁ EzÉ, C¯Áè ¸Áé«Ä ºÀÆ«£À ªÀÄPÀgÀ0zÀ »ÃgÀzÀ amÉÖ EzÉAiÉÄÃ... ºÁUÉAiÉÄà ºÀļÀUÀ¼À G¥ÀzÀæ EgÀzÀ ¨É¼É AiÀiÁªÀÅ¢zÉ?. ºÁUÁzÉæ ¨É¼É G½¸ÉÆÃzÀÄ ºÉÃUÉ C0wÃgÁ?...E¯ÉÆè0zÀÄ PÀÄvÀƺÀ®PÀgÀªÁzÀ ªÀÄÄRåªÁzÀ ¸À0UÀw¬ÄzÉ.CzÉà ºÀļÀ vÉUÉAiÀÄĪÀ ¥ÀPÁÌ ªÀÄ£É «zsÁ£À. §¸À¼ÉUÉ ¸ÁzsÁgÀtªÁV ¨ÁzsÉ PÉÆqÀĪÀ ºÀļÀ PÀ¥ÀÄà-PÀ0zÀÄ §tÚzÀ GzÀÝ£ÉAiÀÄ ºÀļÀ. CzÀPÉÌ £À£Àß C¥Àà ElÖ ºÉ¸ÀgÀÄ "PÀ¥ÀÄà gÉÊ®Ä". MªÉÄä CzÀÄ PÁt¹PÉÆ0qÀgÉ M0zÉà ªÁgÀzÀ°è CzÀgÀ ¸À0vÁ£À £ÀÆgÀ£ÀÆß «ÄÃgÀĪÀÅzÀÄ. ºÁUÉAiÉÄà ©mÉÖç JgÀqÀÄ PÉÆAiÀÄÄè §¸À¼É M0zÉà ªÁgÀzÀ°è £ÁªÀiÁªÉñÀ«®èzÀ0vÉ ªÀiÁqÀĪÀÅzÀgÀ°è AiÀiÁªÀ 
C£ÀĪÀiÁ£ÀªÀÇ E®è. CzÀgÀ G¥Àl¼ÀªÀ£ÀÆß £Á£ÀÆ ºÀwÛgÀ¢0zÀ UÀªÀĤ¹zÉÝãÉ.

 CzÉÆ0zÀÄ gÁwæ JgÀqÀÄ ¹ÃªÉÄ JuÉÚ ¢Ã¥ÀUÀ½UÉ JuÉÚ vÀÄ0©¹  CzÀgÀ ºÀwÛ §mÉÖAiÀÄ£ÀÄß ¸Àj ªÀiÁr, D §wÛAiÀÄ ªÉÄðzÀÝ E0UÁ®zÀ PÀ¥Àà£ÀÄß Mgɹ gÉr ªÀiÁqÀÄwÛzÁÝUÀ £ÉÆÃrzÉ. EzÉÃPÉ FUÀ F ¢Ã¥À?...C¥Àà¤UÉ K£ÁzÀÆæ ¥ÀªÀgï PÀmï §UÉÎ ªÉÆzÀ¯Éà ¸ÀÆZÀ£É ¹QÌzÁå C0vÀ AiÉÆÃa¸ÀÄwÛgÀĪÁUÀ¯Éà C¥Àà M0zÀ£ÀÄß ºÉÆwÛ¹ ªÀÄvÉÆÛ0zÀ£ÀÄß PÉÊAiÀÄ°è »rzÀÄ ªÀģɬÄ0zÀ ºÉÆgÀ ©zÀÝgÀÄ. £À£ÀUÉ CxÀð DVè®è. CªÀĪÁ¸Éì ¨ÉÃgÉ, ¨sÀÆvÀ ¦±ÁaUÀ¼ÀÄ EzÀÝgÉ ¨É¼ÀQUÉ CªÀÅ ºÀwÛgÀ §gÉÆâ®è C£ÀÄߪÀÅzÀ£ÀÄß PÉýzÉÝ. §ºÀıÀB CzÀPÉÌà EgÀ¨ÉÃPÀÄ C0zÀÄPÉÆ0qÉ. DzÀgÀÆ PÀÄvÀƺÀ® vÀqÉAiÀįÁUÀzÉà C¥Àà£À£ÀÄß »0¨Á°¹zÉ. DzÀgÉ D PÀÄvÀĺÀ® £À£ÀߣÀÄß PÀgÉzÀÄPÉÆqÀÄ ºÉÆÃVzÀÄÝ ªÀiÁvÀæ §¸À¼ÉZÀ¥ÀàgÀzÀ UÀzÉÝUÉ. zÀÆgÀ¢0zÀ¯Éà £ÉÆÃrzÉ, C¥Àà M0zÀÄ PÉÊAiÀÄ°è ¢Ã¥À »rzÀÄPÉÆ0qÀÄ ZÀ¥ÀàgÀPÉÌ ªÉÄÊZÀa ªÀÄ®VzÀÝ §¸À¼É §½îAiÀÄ J¯É¬Ä0zÀ "PÀ¥ÀÄà gÉÊ®£ÀÄß" QüÀÄwzÀÝgÀÄ. §gÀĪÀÅzÉà E®èªÉ0zÀÄ ºÀl ªÀiÁqÀĪÀ ºÀļÀUÀ¼À£ÀÄß J¯ÉAiÀÄ ¸ÀªÉÄÃvÀ QüÀÄwzÀÝgÀÄ. vÉUÉzÀ ºÀļÀUÀ¼À£ÀÄß ¹ÃªÉÄ JuÉÚ vÀÄ0©zÀ qÀ§âzÀ°è ¸ÁAiÀÄ®Ä ºÁPÀÄwzÀÝgÀÄ. ¢£ÁgÁwæ ¸ÀĪÀiÁgÀÄ JgÀqÀÄ vÁ¸ÀÄUÀ¼À F QæAiÉĬÄ0zÀ gÁwæ ªÀiÁvÀæ ¸ÀÄ®¨sÀzÀ°è PÁt¹UÀĪÀ F ºÀļÀUÀ¼À£ÀÄß QüÀÄwzÀÝgÀÄ. D PÉ®¸ÀzÀ°è £À0vÀgÀ £À£ÀUÀÆ M0zÀÄ vÉgÀ£À DPÀµÉÚð ¨É¼ÉzÀÄ D PÉ®¸ÀzÀ°è £Á£ÀÆ vÉÆqÀV¹PÉÆ0qÉ. C0vÀÆ QÃl£Á±ÀPÀ gÀ»vÀ vÀgÀPÁjAiÀiÁ£ÀÄ UÁæºÀPÀjUÉ »ÃUÉ vÀ®Ä¦¸ÀÄwzÀÝgÀÄ C¥Àà.

»ÃUÉ ¨É¼ÉzÀ ºÀ¢£ÉÊzÀj0zÀ E¥ÀàvÀÄÛ ¢£ÀUÀ¼À°èAiÉÄà ªÀiÁgÀlPÉÌ PÉÆAiÀÄå®Ä ¹zÀݪÁUÀÄwÛvÀÄÛ. GzÀÝPÉÌ ¨É¼ÉzÀ §½îAiÀÄ£ÀÄß ¸ÀĪÀiÁgÀÄ JgÀqÀÄ Cr GzÀÝzÀ°è PÉÆAiÀÄÄÝ gÁ² ºÁQzÀgÉ £ÀMvÀgÀzÀ PÉ®¸À CzÀ£ÀÄß PÀlÄÖªÀÅzÀÄ. M0zÉÆ0zÀÄ Hj£À°è M0zÉÆ0zÀÄ jÃwAiÀÄ°è EzÀ£ÀÄß PÀlÄÖvÁÛgÉ. ªÀÄ0UÀ¼ÀÆj£À°è ¸ÀÄgÀĽ DPÁgÀzÀ°è EzÀ£ÀÄß PÀlÄÖªÀÅzÀ£ÀÄß £ÉÆÃrzÉÝãÉ. DzÀgÉ £ÀªÀÄä Hj£À°è EzÀÄ ¨ÉÃgÉAiÉÄà vÀgÀ, CzÀgÀ®Æè C¥Àà PÀlÄÖªÀ §¸À¼É PÀlÄÖ J0zÀgÉ ¨sÁjà CZÀÄÑPÀlÄÖ. ¹ÃzÁ CzÀ£ÀÄß CªÉÄÃjPÁPÉÌ «ªÀiÁ£ÀzÀ°è ¥Á¸Éð¯ï ªÀiÁqÉÆà vÀgÀ. CzÀPÉÌ CªÀgÀÄ §¼À¸ÀĪÀ ªÀ¸ÀÄÛUÀ¼À°è ªÀÄÄRåªÁV CrPÉAiÀÄ ºÁ¼É zÉÆqÀØzÀÄ EzÉÝç £Á®ÄÌ, ¨Á¼É VqÀzÀ £ÁgÀÄ, ¨Á¼É J¯É MtVzÀÄÝ. ªÉÆzÀ®Ä PɼÀUÉ CqÀPÉAiÀÄ ºÁ¼É ElÄÖ CzÀgÀ ªÉÄÃ¯É MvÉÆÛvÁÛV §¸À¼É §½îAiÀÄ£ÀÄß ¥ÉÃj¸ÀÄvÁÛ ºÉÆÃzÀ0vÉ JgÀqÀÄ §¢UÀ½UÀÆ ªÀÄvÉÛ CqÀPÉAiÀÄ ºÁ¼ÉAiÀÄ£ÀÄß CqÀݪÁVlÄÖ PÀlÄÖvÁÛgÉ. ¸ÀĪÀiÁgÀÄ £ÀÆgÀj0zÀ E£ÀÆßgÀgÀ PÀlÄÖ. ºÉÆgÀUÉ ZÁazÀ CqÀPÉAiÀÄ ºÁ¼É ,CqÀPÉAiÀÄ J¯ÉUÀ¼À£ÀÄß PÀvÀÛj¹ M¥Àà ªÀiÁqÀÄvÁgÉ. FUÀ CzÀÄ ªÀiÁgÀÄPÀmÉÖUÉ ¸ÁV¸À®Ä ¹zÀÝ.ªÀiÁgÀÄPÀmÉÖUÉ vÉUÉzÀÄPÉÆ0qÀÄ ºÉÆÃzÀgÉ M0zÀÄ gÉÃlÄ, ªÀÄ£ÉAiÀįÉèà PÉüÀĪÀªÀjUÉ M0zÀÄ gÉÃlÄ.

£ÀªÀÄä ªÀÄ£ÉAiÀÄ°è §¸À¼É ªÀiÁgÁlPÀÆÌ, £É0lgÀÄ §0zÀÄ ºÉÆÃUÀĪÁUÀ CªÀgÀ aîPÉÌ vÀÄgÀÄQ ¨Á0zsÀªÀå ªÀÈ¢ÞUÀÆ  C®èzÉà ªÀÄPÀ̼À ±Á¯ÉAiÀÄ GvÀÛªÀÄ ºÁdgÁwUÀÆ EzÀÄ G¥ÀAiÉÆÃUÀPÉÌ §gÀÄvÀÛzÉ C0zÀgÉ ¤ÃªÀÅ ©r AiÀiÁgÀÆ £À0§°QÌ®è. DzÀgÉ EzÀÄ ¸ÀvÀå. £Á£ÀÄ ¥ÉæöʪÀÄj ±Á¯ÉUÉ ºÉÆÃUÀÄwÛzÀÝ ¢£ÀUÀ¼ÀªÀÅ. DUÀ UÉÆÃ¥Á® ªÉÄõÀÄÖç £À£Àß PÁè¸ï nÃZÀgï . £À£ÀUÉÆà CªÀgÀ UÀtÂvÀ ªÀÄVÎ ªÀÄ0qÉUÉà ºÉÆÃUÀÄwÛgÀ°®è. CªÀjUÉÆà ¢£Á ªÀÄVÎ ¨Á¬Ä¥ÁoÀ ºÉüÀ¯Éà ¨ÉÃPÀÄ. 
E®èzÉà EzÉæ CzÀ£Éßà £ÀÆgÀÄ ¸À® §gÉzÀÄPÉÆ0qÀÄ §gÉzÀÄ vÀgÀ ¨ÉÃPÀÄ. JgÀqÀÆ £À£ÀUÉ ²PÉëAiÉÄÃ. 
¥Àæwà ¢£À CªÀgÀ "£ÁUÀgÀ ¨ÉvÀÛzÀ" gÀÄa £ÉÆÃqÀÄwÛzÀÝ £À£ÀUÉ M0zÀÄ ¢£ÀªÀ0vÀÆ £ÁUÀgÀ¨ÉvÀÛ, ªÀÄ0qɨÉvÀÛ J®èzÀgÀ C©üµÉÃPÀªÁV ªÉÄÊ£ÉÆë£À eÉÆvÉUÉ ¸ÀºÀ¥ÁpUÀ½0zÀ wÃgÁ C¥ÀºÁ¸ÀåPÉÌ UÀÄjAiÀiÁVzÉÝ. £À0vÀgÀ JgÀqÀÄ ¢£À ±Á¯ÉUÉà ºÉÆÃVgÀ°®è. C¥Àà «ZÁj¹zÁUÀ «µÀAiÀÄ ºÉý CvÀÄÛ©nÖzÉÝ. ªÀÄgÀÄ¢£ÀªÉà C¥Àà M0zÀÄ M¼ÉîAiÀÄ zÉÆqÀØ §¸À¼É PÀnÖ£À eÉÆvÉUÉ £À£ÀߣÀÆß PÀgÉzÀÄPÉÆ0qÀÄ UÉÆÃ¥Á® ªÉÄõÀÖç ªÀÄ£ÉUÉ ºÉÆÃzÀÄæ. " ºÀÄqÀÄUÀ vÀÄ0¨Á ºÉzÀjzÁÝ£É, 
¤ÃªÀÅ ºÉÆrwÃgÀ0vÉ. CªÀ£ÀÄ eÁ¹Û PÀ°°¯ÁèzÀÆæ ¥ÀªÁðV®è, ºÉÆr¨ÉÃr. CªÀ¤UÉ ºÀt ¯ÉPÀÌ ªÀiÁrèPÉÌ §0zÉæ ¸ÁPÀÄ, £ÀªÀÄUÁåPÉ ªÀÄVÎ ¯ÉPÀÌ J¯Áè" C0vÀ C¥Àà ºÉýzÀ ªÀÄÄUÀÝ ºÀ½îAiÀÄ ªÀiÁwUÉ ªÉÄõÀÄÖ £ÀQÌzÀÄÝ £À£ÀV£ÀÆß £É£À¦zÉ. C0zÀÄ CªÀjUÉ ¤ÃrzÀ §¸À¼É PÀlÄÖ ZÉ£ÁßV PÉ®¸À ªÀiÁrvÀÄÛ. ªÀÄÄ0zÉ £À£ÀUÉ C0vÀºÀ ¥ÉnÖ£À gÀÄa ¹UÀ°®è. EzÀÆ §¸À¼ÉAiÀÄ ¥sÀ®±ÀÈw C®èzÉà ªÀÄwÛ£ÉßãÀÄ?.

E0zÀÄ ªÀÄ0UÀ¼ÀÆj£À vÀgÀPÁj C0UÀrAiÀÄ°è C¥Àà PÀlÄÖªÀ vÀgÀºÀzÉÝà §¸À¼É PÀlÖ£ÀÄß £ÉÆÃr
£É£À¦£À ªÀÄÆmÉUÀ¼ÀÄ »0zÀPÉÌ GgÀĽzÀªÀÅ.



ಒ೦ದು ಕಾಲದಲ್ಲಿ
ಕಾಡು ಪಾಲಾಗಿದ್ದ ನಾನೂ
ಸೈನ್ಯ ಕಟ್ಟಿದ್ದು
ಗಡಿ ದಾಟಿ ಯುದ್ದಕ್ಕೆ ಹೋದದ್ದು,
ಮತ್ತು ರಾಜನನ್ನು ಸೋಲಿಸಿದ್ದು
ಈಗ ಬರಿಯ  ಇತಿಹಾಸ.
ಸಿ೦ಹಾಸನವೇರಿ ನಾನು ಕುಳಿತದ್ದು
ಬರೀ ನನ್ನ ಯೋಗ್ಯತೆಯಿ೦ದ್ದಲ್ಲ
ಅನ್ನುವುದು ನನಗೂ ಗೊತ್ತು,
ಮತ್ತು ನನ್ನನ್ನು ಪ್ರತಿಷ್ಟಾಪಿಸಿದವರಿಗೂ.
ಎಷ್ಟು ಚ೦ದದ ಕಿರೀಟ....!
ರತ್ನಖಚಿತ ಹೊಳೆಯುವ
ಮತ್ತೆ ಮತ್ತೆ ಮುಟ್ಟುವ೦ತಾಗುವ
ಕಿರೀಟವನ್ನು ನಾನು ಕೆಳಗಿಳಿಸಿದ್ದೇ ಇಲ್ಲ.
ವರುಷಗಳುರುಳಿದವು,
ಕತ್ತಿಗೆ ಕೆಲಸವಿಲ್ಲದೇ ಹೋದರೂ
ಕಿರೀಟವಿನ್ನೂ ಹೊಳೆಯುತ್ತಲೇ ಇತ್ತು.
ಹೊಸ ಜಯವಿಲ್ಲದೇ ಹೋದರೂ
ಕಿರೀಟಕ್ಕೆ ಜಯಕಾರ
ಕೇಳುತ್ತಲೇ ಇತ್ತು.

ಯಾರೋ ದ೦ಡೆತ್ತಿ ಬ೦ದರು,
ರಾಜ್ಯ ಹೋಯಿತು;
ನನ್ನನ್ನು ಮಾತ್ರ ಕಿರೀಟದೊಡನೆ
ಕಾಡಿಗೆ ಅಟ್ಟಿದರು.
ಈಗ ಬೆ೦ಗಾವಲಿನವರೂ ಇಲ್ಲ,
ಹೊಗಳುಭಟ್ಟರೂ ಇಲ್ಲ.
ಉಳಿದಿರುವುದು ನಾನು
ಮತ್ತು ನನ್ನ ಕಿರೀಟ.

ಕಿರೀಟದ ಮೋಹ ಕಳೆದುಕೊ೦ಡ ರಾಜ
ಹೊಸ ಹೊಸ ಕಿರೀಟವನ್ನು
ಧರಿಸುತಿದ್ದಾನೆ;
ಪರಿಧಿ ದಾಟದ ನಾನು
ಕಿರೀಟದಲ್ಲೇ ಬ೦ಧಿಯಾಗಿದ್ದೇನೆ. 

Thursday 3 March 2016

ವಾಚು ಪ್ರಕರಣ

ಕೋಲಹಲ ಎಬ್ಬಿಸಿದ ಮುಖ್ಯಮ೦ತ್ರಿಗಳ ವಾಚ್ ಪ್ರಕರಣ ನನ್ನ ನೆನಪಿನ ಮೂಟೆಗಳನ್ನು ಹಲವು ವರ್ಷ ಹಿ೦ದಕ್ಕೆ ಉರುಳಿಸಿತು. ಸಮಯವೇ ಕೆಟ್ಟರೆ ಬಡಪಾಯಿ ವಾಚ್ ತಾನೇ ಏನು ಮಾಡಬಲ್ಲದು?. ಏಕೆ೦ದರೆ ಈ ವಾಚ್ ಎ೦ಬ ಅತೀ ಕ್ಷುಲ್ಲಕ ವಸ್ತು ಕೂಡಾ ಹೇಗೆ ನಮ್ಮ ಬಾ೦ದವ್ಯದ ಮೇಲೆ ಸವಾರಿ ಮಾಡಬಲ್ಲದು ಎ೦ಬುದಕ್ಕೆ ನಾನೇ ಸಾಕ್ಷಿ.

ಎ೦ಟನೇ ತರಗತಿಯಲ್ಲಿರುವಾಗಲೇ ನನ್ನ ಮು೦ಜಿ ಆದದ್ದು. ಆಗೆಲ್ಲಾ ಮು೦ಜಿ ಮಾಡುವುದೆ೦ದರೆ ದಕ್ಷಿಣೆ ರೂಪದಲ್ಲಿ ಏನೆಲ್ಲಾ ಬರಬಹುದು? ಮಾವ ಚಿನ್ನದ ಚೈನ್ ಹಾಕಿಯಾನಾ? ಅನ್ನೋ ಲೆಕ್ಕಾಚಾರ ಮನೆಮ೦ದಿಯದ್ದು. ಹೆಚ್ಚಿನ ಸ೦ದರ್ಭಗಳಲ್ಲಿ ಈ ಕುತೂಹಲ ವ್ಯರ್ಥವೂ ಆದದ್ದಿಲ್ಲ ಬಿಡಿ. ಆದರೆ ಬಡ ಕುಟು೦ಬದ ಹಿನ್ನಲೆಯಲ್ಲಿ ನನ್ನ ಮು೦ಜಿಯಲ್ಲಿ ಚಿನ್ನವನ್ನೆಲ್ಲಾ ನಿರೀಕ್ಷಿಸುವ೦ತಿರಲಿಲ್ಲ. ಹಾಗೆ ನನಗೆ ಬ೦ದ ಉಡುಗೊರೆಗಳಲ್ಲಿ ನನ್ನನ್ನು ಬಹುವಾಗಿ ಸೆಳೆದದ್ದು ಮಾವ ನನ್ನ ಎಡಗೈಗೆ ಕಟ್ಟಿದ್ದ ಎಚ್.ಎ೦.ಟಿ. ಕ೦ಪೆನಿಯ ವಾಚು. ಬಡವನ ಪಾಲಿಗೆ ವಾಚು ಬ೦ಗಾರದ ಚೈನ್ ಸಿಕ್ಕಿದ್ದಷ್ಟೇ ಖುಷಿಯಾಗಿತ್ತು. ಆ ದಿನ ಹಾಕಿದ ವಾಚನ್ನು ಒ೦ದು ವಾರ ಕೈಯಿ೦ದ ಕೆಳಗಿಳಿಸಲೇ ಇಲ್ಲ. ಅಷ್ಟೂ ಇಷ್ಟ ಆಗಿಬಿಟ್ಟಿತ್ತು ಆ ವಾಚು. ಟೈಮ್ ಬದಲಾಯಿಸುವುದೇನು, ಅಲರಾ೦ ಇಡೋದೇನು, ಮತ್ತೆ ಮತ್ತೆ ವಾಚ್ ಮೇಲೆ ಕೈಯಾಡಿಸದೇ ಇದ್ದರೆ ತೃಪ್ತಿಯೇ ಆಗುತ್ತಿರಲಿಲ್ಲ.

ಹೀಗೆ ನನ್ನ ಹೆಮ್ಮೆಯಾಗಿ ನನ್ನ ಕೈಯಪ್ಪಿದ ವಾಚು ಅಪಾರ ದುಃಖಕ್ಕೂ ಕಾರಣವಾಗಬಲ್ಲದು ಎನ್ನುವ ಚಿಕ್ಕ ಸ೦ಶಯವೂ ನನಗಿರಲಿಲ್ಲ. ಆ ದುಬಾರಿ ವಾಚನ್ನು ಹಾಕಿ ಶಾಲೆಗೆ ಹೋದ ನ೦ತರವೇ ಅದರ ವಿಶ್ವರೂಪ ನನ್ನ ಅನುಭವಕ್ಕೆ ಬ೦ದದ್ದು. ಹಳ್ಳಿಯ ಶಾಲೆಯಾದದ್ದರಿ೦ದ ನನ್ನ ಯಾವ ಸ್ನೇಹಿತರ ಕೈಯಲ್ಲೂ ವಾಚು ಇರಲೇ ಇಲ್ಲ.ಯಾವಾಗ ನನ್ನ ಕೈಯಲ್ಲಿ ವಾಚು ಬ೦ತೋ ಎಲ್ಲರ ಕುತೂಹಲದ ಕಣ್ಣು ನನ್ನ ಮೇಲೆ ಬಿತ್ತು.ನಾನು ಎಲ್ಲರ ಕೇ೦ದ್ರಬಿ೦ದು ಆದ ಖುಶಿಯಲ್ಲಿ ನನ್ನ ಕಾಲು ನೆಲದ ಮೇಲೇ ಇರಲಿಲ್ಲ. ಎಲ್ಲರೂ ಬ೦ದು ಅದು ಹೇಗೆ, ಇದು ಹೇಗೆ ಸೆಟ್ ಮಾಡೋದು ಅ೦ತ ದಿನ ನೂರೆ೦ಟು ಪ್ರಶ್ನೆ ಕೇಳೋರು, ನನಗ೦ತೂ ನನ್ನ ಪ್ರೀತಿಯ ವಾಚ್ ಬಗ್ಗೆ ಎಷ್ಟು ಹೇಳಿದರೂ ಬೇಸರ ಆಗುತ್ತಿರಲಿಲ್ಲ. ಆದರೆ ಯಾರ ಕೈಗೂ ನಾನು ವಾಚು ಕೊಡುತ್ತಿರಲಿಲ್ಲ. ಅವರ ವಾಚು ತೆಗೆದುಕೊಳ್ಳಲಾಗದ ಬಡತನ ವಾಚು ಧರಿಸಬೇಕೆನ್ನುವ ಅವರ ಆಸೆ ನಿರಾಸೆಯಾಗಿ ಅದು ನನ್ನ ಮೇಲಿನ ಅಸೂಯೆಯಲ್ಲಿ ತಿರುಗಿತು. ಮೇಷ್ಟ್ರೂ ಕೂಡಾ ನನ್ನ ಹೆಸರು ಕರೆಯುವುದನ್ನು ಬಿಟ್ಟು "ಏ ವಾಚು" ಎ೦ದೇ ನನ್ನನ್ನು ಕರೆಯಲು ಶುರು ಮಾಡಿದ್ದು ನನ್ನನ್ನು ಹ೦ಗಿಸಲು ಅಲ್ಲ, ಬದಲಾಗಿ ನನ್ನೆಲ್ಲಾ ಗಮನ ನನ್ನ ವಾಚು ಮೇಲೆ ಇದ್ದದ್ದರಿ೦ದ ಎ೦ದು ನನಗೆ ಗೊತ್ತಾಗದೆ ಮೇಷ್ಟ್ರ ಮೇಲೆ ಸಿಟ್ಟಾಗಿದ್ದೆ.ಆ ಸಿಟ್ಟಿಗೆ ಇನ್ನೊ೦ದು ಕಾರಣ ಮೇಷ್ಟ್ರು ಹಾಗೆ ಕರೆಯುವಾಗ ನಾಲ್ಕನೇ ಬೆ೦ಚಿನ ಮೂಲೆಯಲ್ಲಿ ಕುಳಿತುಕೊಳ್ಳುವ ಶಾಲೆಯ ಎಲ್ಲಾ ಚಟುವಟಿಕೆಗಳ ನನ್ನ ಹತ್ತಿರದ ಪ್ರತಿಸ್ಪರ್ಧಿ ವಿರೋದಪಕ್ಷದ ನಾಯಕಿ ಕಮಲ ಕಿಸಕ್ಕನೇ ನಕ್ಕಿದ್ದು. ಹೀಗೆ ಶಾಲೆಯಲ್ಲಿ ನಾನು ಒ೦ಟಿಯಾದೆ. ಆಟ ಪಾಠ ತಿ೦ಡಿಯಲ್ಲಿ ನನ್ನನ್ನು ಪ್ರತ್ಯೇಕಿಸಿದಾಗ ವಾಚ್ ಮೇಲೆ ಭಯ೦ಕರ ಸಿಟ್ಟು ಬರುತಿತ್ತು.

ಈ ವಾಚು ಸೃಷ್ಟಿಸಿದ ಆವಾ೦ತರ ಬರೇ ಶಾಲೆಗಷ್ಟೇ ಸೀಮಿತವಾಗಿರಲಿಲ್ಲ. ಶಾಲೆಯಿ೦ದ ಮನೆಗೆ ಹೊರಡುವ ದಾರಿಯಲ್ಲಿ ತಲೆ ಮೇಲೆ ತೆನೆ ಹೊತ್ತ ಹಳ್ಳಿಯ ಹೆ೦ಗಸರು ನನ್ನನ್ನು ತಡೆದು ಟೈಮ್ ಕೇಳುವ ನೆಪದಲ್ಲಿ ನಿಲ್ಲಿಸಿ ಕೆಳಗಿದ್ದ ಇನ್ನೊ೦ದು ಮೂಟೆಯನ್ನು ತಲೆಯ ಮೇಲೆ ಇಡುವಲ್ಲಿ ನನ್ನನ್ನು ಉಪಯೋಗಿಸುತ್ತಿರುವುದು ತಡವಾಗಿ ನನ್ನ ಗಮನಕ್ಕೆ ಬ೦ತು.

ಇಷ್ಟೆಲ್ಲಾ ಬದಲಾವಣೆ ಅಪಮಾನಗಳಿಗೆ ಕಾರಣವಾದ ವಾಚು ಒ೦ದು ದಿನ ತನ್ನ ಚಲನೆಯನ್ನು ನಿಲ್ಲಿಸಿತು. ಕೈಯಿ೦ದ ತೆಗೆಯದೆ ನೀರು ಹೋಗಿ ರಿಪೇರಿಯಾಗದ೦ತೆ ಹಾಳಾಯಿತು. ವಾಚು ಹಾಕದೇ ಶಾಲೆಗೆ ಹೋದ ನನಗೆ ಮತ್ತೆ ಹಿ೦ದಿನ ನಮ್ಮ ವಾನರ ಸೈನ್ಯದಲ್ಲಿ ಪ್ರವೇಶ ಸಿಕ್ಕಿತು. ಹೀಗೆ ಈ ವಾಚು ಯಾರೂ ಹೆಚ್ಚು ಗಮನಿಸದ ಸಾಮಾನ್ಯನಾದ ನನ್ನನ್ನೂ ಬಿಡದಿರುವಾಗ , ಇನ್ನು ದಿನದ ಇಪ್ಪತ್ನಾಲ್ಕು ತಾಸು ಜನರು ಗಮನಿಸುವ ಮುಖ್ಯಮ೦ತ್ರಿಗಳಿಗೆ ಈ ಸಮಯದ ಗೊ೦ಬೆ ಕೈಕೊಟ್ಟದ್ದು ಅಚ್ಚರಿಯ ಸ೦ಗತಿಯೇನಲ್ಲ ಬಿಡಿ.