Sunday 3 December 2017

ಬಯಲಿನ ಮನೆಯ
ಕದವನು ತೆರೆಯದೆ
ಬೆಳಕಿನ ಅರಿವು ಕಾಣಿಸದು
ಒಳಗಿನ ಬೀದಿಯ
ಕಸವನು ಮರೆತರೆ
ನಿರ್ಮಲ ಶಾಂತಿ ಎಲ್ಲಿಯದು?

ಮನಸಿನ ಕುದುರೆಗೆ
ಲಗಾಮು ಬಿಗಿಯದೆ
ಸೇರುವ ದಾರಿಯು ಗುರಿಯಲ್ಲ
ತುಮುಲದ ತೆರೆಯನು
ಸರಿಸದೆ ನದಿಯಲಿ
ಮಾಡಿದ ಸ್ನಾನವು ಶುಚಿಯಲ್ಲ

ಬಯಕೆಯ ಮೀನಿಗೆ
ಕಾದಿಹ ಬಕಕೂ
ಧ್ಯಾನದ ಸ್ಥಿತಿಯ ಹಂಗಿಲ್ಲ
ಫಲವನು ಬಯಸದೆ
ಮಾಡುವ ಕರ್ಮಕೆ
ಸಿದ್ಧಿಯು ಎಂದಿಗು ತಪ್ಪಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment