ಪರಿಚಿತರಾಗುವುದೆಂದರೆ ಅದು
ಅಷ್ಟು ಸುಲಭದ ಕೆಲಸವೇ?
ಕೋಟೆ ಬಾಗಿಲು ತೆರೆದು
ಒಳ ಹೊಕ್ಕಾಗಲೂ
ಏಕಾಂಗಿ ಅನ್ನಿಸುವುದಾದರೆ,
ನಾವಿನ್ನೂ
ತೊಟ್ಟಿಕ್ಕುತ್ತಿರುವ ಒಂದೇ ಮಳೆಯ
ಬೇರೆ ಬೇರೆ ಬಿಂದುಗಳು.
ಅಷ್ಟಕ್ಕೂ ನಾವು
ಪರಿಚಿತರಾಗಿದ್ದು ಯಾವಾಗ?
ಒಟ್ಟಿಗಿದ್ದಾಗಲೂ
ನಿನ್ನೆಲ್ಲ ಮಾತು ಮೌನ
ಅಸಹನೆ ಕೋಪ
ನನಗರ್ಥವಾಗದೇ ಉಳಿದಿರುವಾಗ
ಪರಿಚಿತರಾಗಿದ್ದೇವೆನ್ನುವುದು
ಹಸಿ ಹಸಿ ಸುಳ್ಳಲ್ಲವೆ?
ನಿನ್ನ ಬದುಕಿನ ಉತ್ಕಟ
ಕ್ಷಣಗಳಲ್ಲಿ
ತೀವ್ರವಾಗಿ ಕಾಡಿದ ನೆನಪುಗಳಲ್ಲಿ
ನಾನಿಲ್ಲವೆಂಬುದೇ ಸತ್ಯ
ಅನ್ನವುದಾದರೆ
ನಾವಿನ್ನೂ
ಯಾವತ್ತೂ ಸಂಧಿಸದ
ನಿರ್ಜನ ಬೀದಿಯ ಅನಾಮಿಕರು.
ಅದೆಷ್ಟು ಬೆಳಕಿತ್ತು
ಆ ಬೀದಿಯ ತುಂಬಾ.
ಕಣ್ಣಲ್ಲಿ ಹೊಳೆದದ್ದೇ ನೀನು ಮತ್ತು
ತುಂಬಿದ ಬೆಳದಿಂಗಳು!
ಎಲ್ಲವೂ ಎಲ್ಲರಿಗೂ
ಕಾಣುವಂತೆ ಅದೆಷ್ಟು ಸ್ಪಷ್ಟತೆ!
ಅಲ್ಲಿ ಯಾವುದೂ ಅಪರಿಚಿತ
ಅನಿಸಲೇ ಇಲ್ಲ.
ಇದೀಗ,
ಬೆಳಕು ಆರಿದ ಮೇಲೂ
ಆ ಬೀದಿ ಇನ್ನೂ ಪರಿಚಿತವೇ
ಆದರೆ,
ಅಲ್ಲಿ ಸಿಕ್ಕಿದ ನಾವು?
ಅನೇಕದಲ್ಲಿ ಏಕ!
ಅನ್ನವ ಭ್ರಮೆಯಲ್ಲಿ ಸುಖಿಸಿ,
ಅದನ್ನೇ ನಂಬುತ್ತಾ ಬದುಕಿದ್ದೇವೆ ಮತ್ತು
ಬಲು ದೂರ ಜೊತೆಯಾಗಿಯೇ
ಸಾಗಿ ಬಂದಿದ್ದೇವೆ.
ಆದರೆ ನಾವಿಂದೂ
ಒಳಗಿಳಿಯದ,
ಕಲಸಿ ಬಿಳಿಯಾಗದ
ನಿತ್ಯ ನೂತನ ಕಾಮನ ಬಿಲ್ಲು;
ಜಗದ ಕಣ್ಣು ಕುಕ್ಕುವ
ಎಷ್ಟೊಂದು ಬೆರಗಿನ ಬಣ್ಣಗಳು!
ಸಾಕಿನ್ನು,
ಮತ್ತೆ ಅಪರಿಚಿತರಾಗಿಬಿಡಬೇಕು
ಕಳೆದುಹೋದಂತೆ
ಯಾವುದೋ ಹೊಸ ಬೀದಿಯಲ್ಲಿ.
ಮತ್ತೆ ಮತ್ತೆ
ನಿನ್ನಲ್ಲಿ ನನ್ನನ್ನು
ನನ್ನಲ್ಲಿ ನಿನ್ನನ್ನು;
ಹುಡುಕುವ ಸಾರ್ಥಕ
ಸುಖಕ್ಕಾಗಿಯಾದರೂ.
# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅಷ್ಟು ಸುಲಭದ ಕೆಲಸವೇ?
ಕೋಟೆ ಬಾಗಿಲು ತೆರೆದು
ಒಳ ಹೊಕ್ಕಾಗಲೂ
ಏಕಾಂಗಿ ಅನ್ನಿಸುವುದಾದರೆ,
ನಾವಿನ್ನೂ
ತೊಟ್ಟಿಕ್ಕುತ್ತಿರುವ ಒಂದೇ ಮಳೆಯ
ಬೇರೆ ಬೇರೆ ಬಿಂದುಗಳು.
ಅಷ್ಟಕ್ಕೂ ನಾವು
ಪರಿಚಿತರಾಗಿದ್ದು ಯಾವಾಗ?
ಒಟ್ಟಿಗಿದ್ದಾಗಲೂ
ನಿನ್ನೆಲ್ಲ ಮಾತು ಮೌನ
ಅಸಹನೆ ಕೋಪ
ನನಗರ್ಥವಾಗದೇ ಉಳಿದಿರುವಾಗ
ಪರಿಚಿತರಾಗಿದ್ದೇವೆನ್ನುವುದು
ಹಸಿ ಹಸಿ ಸುಳ್ಳಲ್ಲವೆ?
ನಿನ್ನ ಬದುಕಿನ ಉತ್ಕಟ
ಕ್ಷಣಗಳಲ್ಲಿ
ತೀವ್ರವಾಗಿ ಕಾಡಿದ ನೆನಪುಗಳಲ್ಲಿ
ನಾನಿಲ್ಲವೆಂಬುದೇ ಸತ್ಯ
ಅನ್ನವುದಾದರೆ
ನಾವಿನ್ನೂ
ಯಾವತ್ತೂ ಸಂಧಿಸದ
ನಿರ್ಜನ ಬೀದಿಯ ಅನಾಮಿಕರು.
ಅದೆಷ್ಟು ಬೆಳಕಿತ್ತು
ಆ ಬೀದಿಯ ತುಂಬಾ.
ಕಣ್ಣಲ್ಲಿ ಹೊಳೆದದ್ದೇ ನೀನು ಮತ್ತು
ತುಂಬಿದ ಬೆಳದಿಂಗಳು!
ಎಲ್ಲವೂ ಎಲ್ಲರಿಗೂ
ಕಾಣುವಂತೆ ಅದೆಷ್ಟು ಸ್ಪಷ್ಟತೆ!
ಅಲ್ಲಿ ಯಾವುದೂ ಅಪರಿಚಿತ
ಅನಿಸಲೇ ಇಲ್ಲ.
ಇದೀಗ,
ಬೆಳಕು ಆರಿದ ಮೇಲೂ
ಆ ಬೀದಿ ಇನ್ನೂ ಪರಿಚಿತವೇ
ಆದರೆ,
ಅಲ್ಲಿ ಸಿಕ್ಕಿದ ನಾವು?
ಅನೇಕದಲ್ಲಿ ಏಕ!
ಅನ್ನವ ಭ್ರಮೆಯಲ್ಲಿ ಸುಖಿಸಿ,
ಅದನ್ನೇ ನಂಬುತ್ತಾ ಬದುಕಿದ್ದೇವೆ ಮತ್ತು
ಬಲು ದೂರ ಜೊತೆಯಾಗಿಯೇ
ಸಾಗಿ ಬಂದಿದ್ದೇವೆ.
ಆದರೆ ನಾವಿಂದೂ
ಒಳಗಿಳಿಯದ,
ಕಲಸಿ ಬಿಳಿಯಾಗದ
ನಿತ್ಯ ನೂತನ ಕಾಮನ ಬಿಲ್ಲು;
ಜಗದ ಕಣ್ಣು ಕುಕ್ಕುವ
ಎಷ್ಟೊಂದು ಬೆರಗಿನ ಬಣ್ಣಗಳು!
ಸಾಕಿನ್ನು,
ಮತ್ತೆ ಅಪರಿಚಿತರಾಗಿಬಿಡಬೇಕು
ಕಳೆದುಹೋದಂತೆ
ಯಾವುದೋ ಹೊಸ ಬೀದಿಯಲ್ಲಿ.
ಮತ್ತೆ ಮತ್ತೆ
ನಿನ್ನಲ್ಲಿ ನನ್ನನ್ನು
ನನ್ನಲ್ಲಿ ನಿನ್ನನ್ನು;
ಹುಡುಕುವ ಸಾರ್ಥಕ
ಸುಖಕ್ಕಾಗಿಯಾದರೂ.
# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು