Wednesday 26 April 2017

ಪ್ರಾರ್ಥನಾ ಗೀತೆ.

ಶತಮಾನದ ನೋವುಗಳ
ಮೆಟ್ಟಿ ನಿಂತ ಚಿಲುಮೆಯೆ |
ಮನುಕುಲದ ಕೊಳೆಯ ಕಳೆಯೆ
ಉದ್ಧರಿಸಿದ ಒಲುಮೆಯೆ ||

ವಂದನೆ ನಿನಗೆ ವಂದನೆ
ಓ ಭೀಮರಾವ್ ನಿನಗೆ ವಂದನೆ (೧)

ಜಾತಿಮತದ ಕೆಸರಿನಿಂದ
ಎದ್ದು ನಿಂತ ಕಮಲವೆ |
ಮೇಲುಕೀಳು ಮುಳ್ಳ ಕೆಡವಿ
ಅರಳಿ ನಿಂತ ಕುಸುಮವೆ ||

ವಂದನೆ ನಿನಗೆ ವಂದನೆ
ಸಂವಿಧಾನ ಶಿಲ್ಪಿಯೇ ವಂದನೆ (೨)

ಸ್ವಾಭಿಮಾನ ಕಿಚ್ಚು ಹರಿಸಿ
ಕ್ರಾಂತಿ ತಂದ ಚೇತನವೆ |
ವಿದ್ಯೆಯ ಧೀಃಶಕ್ತಿ ಅರಿತು
ಭಾಷ್ಯ ಬರೆದ ಜ್ಯೋತಿಯೆ ||

ವಂದನೆ ನಿನಗೆ ವಂದನೆ
ಓ ಅಂಬೇಡ್ಕರ್ ನಿನಗೆ ವಂದನೆ  (೩).

No comments:

Post a Comment