ಪ್ರಾರ್ಥನಾ ಗೀತೆ.
ಶತಮಾನದ ನೋವುಗಳ
ಮೆಟ್ಟಿ ನಿಂತ ಚಿಲುಮೆಯೆ |
ಮನುಕುಲದ ಕೊಳೆಯ ಕಳೆಯೆ
ಉದ್ಧರಿಸಿದ ಒಲುಮೆಯೆ ||
ವಂದನೆ ನಿನಗೆ ವಂದನೆ
ಓ ಭೀಮರಾವ್ ನಿನಗೆ ವಂದನೆ (೧)
ಜಾತಿಮತದ ಕೆಸರಿನಿಂದ
ಎದ್ದು ನಿಂತ ಕಮಲವೆ |
ಮೇಲುಕೀಳು ಮುಳ್ಳ ಕೆಡವಿ
ಅರಳಿ ನಿಂತ ಕುಸುಮವೆ ||
ವಂದನೆ ನಿನಗೆ ವಂದನೆ
ಸಂವಿಧಾನ ಶಿಲ್ಪಿಯೇ ವಂದನೆ (೨)
ಸ್ವಾಭಿಮಾನ ಕಿಚ್ಚು ಹರಿಸಿ
ಕ್ರಾಂತಿ ತಂದ ಚೇತನವೆ |
ವಿದ್ಯೆಯ ಧೀಃಶಕ್ತಿ ಅರಿತು
ಭಾಷ್ಯ ಬರೆದ ಜ್ಯೋತಿಯೆ ||
ವಂದನೆ ನಿನಗೆ ವಂದನೆ
ಓ ಅಂಬೇಡ್ಕರ್ ನಿನಗೆ ವಂದನೆ (೩).
ಶತಮಾನದ ನೋವುಗಳ
ಮೆಟ್ಟಿ ನಿಂತ ಚಿಲುಮೆಯೆ |
ಮನುಕುಲದ ಕೊಳೆಯ ಕಳೆಯೆ
ಉದ್ಧರಿಸಿದ ಒಲುಮೆಯೆ ||
ವಂದನೆ ನಿನಗೆ ವಂದನೆ
ಓ ಭೀಮರಾವ್ ನಿನಗೆ ವಂದನೆ (೧)
ಜಾತಿಮತದ ಕೆಸರಿನಿಂದ
ಎದ್ದು ನಿಂತ ಕಮಲವೆ |
ಮೇಲುಕೀಳು ಮುಳ್ಳ ಕೆಡವಿ
ಅರಳಿ ನಿಂತ ಕುಸುಮವೆ ||
ವಂದನೆ ನಿನಗೆ ವಂದನೆ
ಸಂವಿಧಾನ ಶಿಲ್ಪಿಯೇ ವಂದನೆ (೨)
ಸ್ವಾಭಿಮಾನ ಕಿಚ್ಚು ಹರಿಸಿ
ಕ್ರಾಂತಿ ತಂದ ಚೇತನವೆ |
ವಿದ್ಯೆಯ ಧೀಃಶಕ್ತಿ ಅರಿತು
ಭಾಷ್ಯ ಬರೆದ ಜ್ಯೋತಿಯೆ ||
ವಂದನೆ ನಿನಗೆ ವಂದನೆ
ಓ ಅಂಬೇಡ್ಕರ್ ನಿನಗೆ ವಂದನೆ (೩).
No comments:
Post a Comment