Monday 14 August 2017

ಅಮ್ಮನು ನಿನ್ನನೆ ಕಂದಾ ಎನ್ನುತ
ಮನೆಯಲಿ ದಾರದಿ ಕಟ್ಟಿದಳು
ಮುಗ್ದನ ತೆರದಿ ಕಾಡುತ ನೀನು
ಬಾಯಲಿ ಜಗವನೆ ತೋರಿಸಿದೆ

ರಾಧೆಯು ನಿನ್ನಯ ಪ್ರೇಮವ ಬೇಡುತ
ಮನದಲಿ ಗುಡಿಯನು ಕಟ್ಟಿದಳು
ಎಲ್ಲಿಯೂ ನಿಲ್ಲದ ಯಮುನೆಯ ಹರಿವಲಿ
ನಾದದಿ ಜಗವನೆ ತೇಲಿಸಿದೆ

ಮೋಹದ ಪರದೆಯ ಮುಸುಕಲು ಮನದಲಿ
ಪಾರ್ಥನು ಕರ್ಮಕೆ ಮರುಗಿದನು
ಜ್ಞಾನದ ಗೀತೆಯ ಸಾರವ ಬೋಧಿಸಿ
ನರರನು ಯುದ್ದದಿ ಗೆಲ್ಲಿಸಿದೆ

ನನಗೇ ಬೇಕು ಅನ್ನುವ ಲೋಕಕೆ
ಸಿಗದೇ ನೀನು ನಗುತಿರುವೆ
ತನ್ನನು ಬಿಟ್ಟು ಕೃಷ್ಣನೇ ಆಗುವ
ಭಾವದಿ ಮಾತ್ರ ದಕ್ಕಿರುವೆ

ಕೃಷ್ಣಂ ವಂದೇ ಜಗದ್ಗುರುಂ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment