ಅಮ್ಮನು ನಿನ್ನನೆ ಕಂದಾ ಎನ್ನುತ
ಮನೆಯಲಿ ದಾರದಿ ಕಟ್ಟಿದಳು
ಮುಗ್ದನ ತೆರದಿ ಕಾಡುತ ನೀನು
ಬಾಯಲಿ ಜಗವನೆ ತೋರಿಸಿದೆ
ರಾಧೆಯು ನಿನ್ನಯ ಪ್ರೇಮವ ಬೇಡುತ
ಮನದಲಿ ಗುಡಿಯನು ಕಟ್ಟಿದಳು
ಎಲ್ಲಿಯೂ ನಿಲ್ಲದ ಯಮುನೆಯ ಹರಿವಲಿ
ನಾದದಿ ಜಗವನೆ ತೇಲಿಸಿದೆ
ಮೋಹದ ಪರದೆಯ ಮುಸುಕಲು ಮನದಲಿ
ಪಾರ್ಥನು ಕರ್ಮಕೆ ಮರುಗಿದನು
ಜ್ಞಾನದ ಗೀತೆಯ ಸಾರವ ಬೋಧಿಸಿ
ನರರನು ಯುದ್ದದಿ ಗೆಲ್ಲಿಸಿದೆ
ನನಗೇ ಬೇಕು ಅನ್ನುವ ಲೋಕಕೆ
ಸಿಗದೇ ನೀನು ನಗುತಿರುವೆ
ತನ್ನನು ಬಿಟ್ಟು ಕೃಷ್ಣನೇ ಆಗುವ
ಭಾವದಿ ಮಾತ್ರ ದಕ್ಕಿರುವೆ
ಕೃಷ್ಣಂ ವಂದೇ ಜಗದ್ಗುರುಂ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮನೆಯಲಿ ದಾರದಿ ಕಟ್ಟಿದಳು
ಮುಗ್ದನ ತೆರದಿ ಕಾಡುತ ನೀನು
ಬಾಯಲಿ ಜಗವನೆ ತೋರಿಸಿದೆ
ರಾಧೆಯು ನಿನ್ನಯ ಪ್ರೇಮವ ಬೇಡುತ
ಮನದಲಿ ಗುಡಿಯನು ಕಟ್ಟಿದಳು
ಎಲ್ಲಿಯೂ ನಿಲ್ಲದ ಯಮುನೆಯ ಹರಿವಲಿ
ನಾದದಿ ಜಗವನೆ ತೇಲಿಸಿದೆ
ಮೋಹದ ಪರದೆಯ ಮುಸುಕಲು ಮನದಲಿ
ಪಾರ್ಥನು ಕರ್ಮಕೆ ಮರುಗಿದನು
ಜ್ಞಾನದ ಗೀತೆಯ ಸಾರವ ಬೋಧಿಸಿ
ನರರನು ಯುದ್ದದಿ ಗೆಲ್ಲಿಸಿದೆ
ನನಗೇ ಬೇಕು ಅನ್ನುವ ಲೋಕಕೆ
ಸಿಗದೇ ನೀನು ನಗುತಿರುವೆ
ತನ್ನನು ಬಿಟ್ಟು ಕೃಷ್ಣನೇ ಆಗುವ
ಭಾವದಿ ಮಾತ್ರ ದಕ್ಕಿರುವೆ
ಕೃಷ್ಣಂ ವಂದೇ ಜಗದ್ಗುರುಂ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
No comments:
Post a Comment