Wednesday 29 June 2011

modala kavana

ದಿನಕರನಿಗೆ

ಬಾನಂಚಿನಲಿ ಕತ್ತಲ ಮಸುಕು ಇಣುಕಿ
ಹಕ್ಕಿಗಳು ವಿರಹ ಗೀತೆ ಗುನುಗುತಿರುವಾಗ,
ಬರಲಿರುವ ನಿಶೆಗೆ ಹೆದರಿ ಹೋಗಿ 
ಮುಖವೆತ್ತದೆ  ಕಮಲ ಬಾಡುತಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಅಜ್ಞಾನದ ಮುಸುಕು ಎಲ್ಲೆಡೆ ಹರಡಿ
ಜ್ಞಾನದ ದೀಪ ನಂದಿ ಹೋಗಿರುವಾಗ,
ಅಲೆಗಳ ಆರ್ಭಟವಿಲ್ಲದೆ ಹೋಗಿ
ಕಡಲ ಒಡಲು ಬತ್ತಿ ಹೋಗಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಕಡಲ ತೀರದಿ ಮೂಡುವ ನಿನ್ನ
ಹೊಂಬಣ್ಣ ನೋಡಲು ಹವಣಿಸುತಿರುವಾಗ,
ಮನ ಸೂರೆ ಮಾಡುವ ದಿವ್ಯ ರೂಪವ
ಚಿತ್ರಿಸಲು ನಾಂದಿ ಹಾಡಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಕಡಲ ತೀರದ ತಲ್ಪದಿ ಕುಳಿತು
ಕುಂಚ ಹಿಡಿದು ಚಿಂತಿಸುತಿರುವಾಗ,
ಮನದಲ್ಲಿ ಮೂಡುವ ಕಲ್ಪನೆಗಳಿಗೆ
ರೂಪ ನೀಡಲು ಕಾತರಿಸುತಿರುವಾಗ,
     ಕರಗಿ ಹೋಗದಿರು ರವಿ
     ಇರುಳ ಮರೆಯಾಗಿ.

(ಸ್ಫೂರ್ತಿ: ಹಾಡಿ ಬಿಡು ಕೋಗಿಲೆಯೇ ಕಾಯದೆ ಚೈತ್ರಕ್ಕಾಗಿ  , ಕವನ) 



1 comment:

  1. ravi karagidano illavo gottilla adre nimmi kavitheyalli naa karagi hoddadu matra nija

    ReplyDelete