Tuesday 28 June 2011

ಅಭಿವ್ಯಕ್ತ 


ಬಾನಎತ್ತರಕ್ಕೇರುವ ಮಾನವನ ಆಸೆ,
ಇರಬೇಕು ತನ್ನ ಇತಿಮಿತಿಗಳರಿವು;
ಬೇರುಗಳ ನೆಲದಲ್ಲಿಯೇ ಆಳಕ್ಕಿಳಿಸಿ 
ಮಣ್ಣಿನ ಸತ್ವ,ಸಂಸ್ಕೃತಿಯ ಹೀರಿ,
ಮಾಡಬೇಕು ಗಗನ ಚುಂಬಿಸುವ ಆಸೆ.
ರೆಕ್ಕೆ ಮೂಡಿದೊಡನೆಯೇ ಹಾರುವ 
ಪುಟ್ಟ ಹಕ್ಕಿಯ ಬಯಕೆ,
ಕನ್ನಡಿಯೊಳಗಿನ ತನ್ನ ಪ್ರತಿಬಿಂಬಕ್ಕೆ
ತಾನೇ ಮುತ್ತಿಕ್ಕಿದಂತೆ;
ಬಿಸಿಲುಗುದುರೆಯ ಬೆನ್ನ ಹತ್ತಿ 
ಮಾಯಾ ಜಿಂಕೆಯ ಬೇಟೆ?
ಕೈಗೆಟಕುವುದು ಅಂದುಕೊಳ್ಳುವಾಗ
ಮರೆಯಾಗುವುದು ನೆರಳು.
ಕಾಗದದ ದೋಣಿಯಲ್ಲಿ ದಡ ಸೇರುವ ತವಕ,
ಮುಳುಗುವ ಸೂರ್ಯನ ಹಿಡಿದಿಡುವ ಧಾವಂತ,
ಭಾವುಕ ಮನದ ನವಿರು  ಅಭಿವ್ಯಕ್ತಿ.

No comments:

Post a Comment