Friday 16 June 2017

ಭರವಸೆ

ಈ ಬದುಕೇ ಶಾಪ ಅನ್ನದಿರು
ಆಸೆಗಳೇ ಸಾಯಲು;
ಹೀಗೆ ಕೈಚೆಲ್ಲಿ ಕೂರದಿರು
ನಿರಾಸೆ ಕಾಡಲು.

ಕೆಂಡ ಎಷ್ಟಾದರೂ ಉರಿಯಲಿ ಒಳಗೆ
ಬೆಚ್ಚಗೆ ಇದ್ದು ಬಿಡು;
ಕೆಂಡ ಮುಚ್ಚಿದ ಬೂದಿ ಹಾರದಿದ್ದರಾಯಿತು
ಒಳಗ ತೋರದಿದ್ದರಾಯಿತು.

ಸೇತುವೆಗಳು ಎಷ್ಟಾದರೂ ಮುರಿಯಲಿ ನಡುವೆ
ನಗೆಯ ತೇಲಿ ಬಿಡು;
ಮಾತಿನ ಹಾಯಿದೋಣಿ ಮುಳುಗದಿದ್ದರಾಯಿತು
ಶಾಂತಿ ಕದಡದಿದ್ದರಾಯಿತು.

ಕತ್ತಲು ಎಷ್ಟಾದರೂ ಕವಿಯಲಿ ಮನೆಗೆ
ಚಿಂತೆ ಇಲ್ಲ ಬಿಡು;
ಮೂಡುವ ಆಸೆಯ ಸೂರ್ಯ ಮುನಿಯದಿದ್ದರಾಯಿತು
ಬೆಳಕು ಆರದಿದ್ದರಾಯಿತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment