Sunday 25 December 2016

ಗೆಜ್ಜೆನಾದವಿರದೆ
ಗೋಕುಲದಲಿ ನಗುವಿಲ್ಲ|
ಕೊಳಲ ದನಿಯಿರದೆ
ಬೃಂದಾವನದಲಿ ಒಲವಿಲ್ಲ||

ನೊರೆಹಾಲ ನೋಡಲು
ಶ್ಯಾಮ ನೆನಪಾಗುತಿರೆ|
ಕಡೆಗೋಲು ತಾಕಲು
ಕನ್ನಯ್ಯನಾಟ ಕಾಡುತಿರೆ ||
ಬಿಕ್ಕುವಳು ಯಶೋಧೆ ಶೋಕದಲಿ ;
ಕಂದನಿಗಾಗಿ ಹಗಲಿರುಳು.

ನಂಬಲಿಲ್ಲ ರಾಧೆ ಇನ್ನೂ
ಕೃಷ್ಣನಿಲ್ಲವೆಂದು |
ಕಾಯುತಿಹಳು ನಿತ್ಯ ಅವಳು
ಯಮುನೆ ಹರಿವುದೆಂದು ||
ಕನಲುವಳು ರಾಧೆ ವಿರಹದಲಿ ;
ನಲ್ಲನಿಗಾಗಿ ಅನುದಿನವು.

No comments:

Post a Comment