ಮನಸು ಹೊರಳಿದೆ ಹೊನ್ನಸೂರಿಗೆ
ಸೇರೊ ದಾರಿಯದೆಲ್ಲಿದೆ
ಹುಚ್ಚು ಬಯಕೆಯ ಕಳೆವ ಗಿರಿಪಥ
ದಲ್ಲಿ ದರಿಗಳು ಹಲವಿದೆ
ಗುರಿಯ ಕಾಣದೆ ಬಳಲಿದೆ
ತೋರೊ ಗುರು ನೀನೆಲ್ಲಿಹೆ
ಇಲ್ಲೆ ಇದ್ದ ಗಳಿಗೆಯಲ್ಲಿ
ಬಿಡದೆ ಅವನ ಕಾಡಿದೆ
ಮೇರೆ ಇರದ ಅರಸನಲ್ಲಿ
ಬರಿದೆ ಪ್ರೇಮ ಬೇಡಿದೆ
ಎಂಥ ಹುಚ್ಚು ನನ್ನದು
ಹೃದಯವೆಷ್ಟು ಸಣ್ಣದು
ದಾಹ ಕಳೆವ ದೇವನಲ್ಲಿ
ಗುಟುಕಿಗಾಗಿ ಕಾಡಿದೆ;
ಅವನ ಹರವು ಅರಿಯದೆ
ಒಡಲ ಮೋಹ ಬಿಡದು ಇಲ್ಲಿ
ಮುರಳಿಗಾನ ಕೇಳದೆ
ದಡದ ಹಂಗು ತೀರದಿಲ್ಲಿ
ಒಲವ ನದಿಯು ಹರಿಯದೆ
ಬಯಲು ಎಷ್ಟು ಕರೆದರೂ
ನಿಜದ ಸದ್ದು ಕೇಳದು
ಒಂದು ಹೆಜ್ಜೆಯ ಹಾಕದೆ
ಗೆಜ್ಜೆ ಕಾಲಿಗೆ ಕಟ್ಟಿದೆ;
ಜಗದ ಹೆಮ್ಮೆಯನಪ್ಪಿದೆ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸೇರೊ ದಾರಿಯದೆಲ್ಲಿದೆ
ಹುಚ್ಚು ಬಯಕೆಯ ಕಳೆವ ಗಿರಿಪಥ
ದಲ್ಲಿ ದರಿಗಳು ಹಲವಿದೆ
ಗುರಿಯ ಕಾಣದೆ ಬಳಲಿದೆ
ತೋರೊ ಗುರು ನೀನೆಲ್ಲಿಹೆ
ಇಲ್ಲೆ ಇದ್ದ ಗಳಿಗೆಯಲ್ಲಿ
ಬಿಡದೆ ಅವನ ಕಾಡಿದೆ
ಮೇರೆ ಇರದ ಅರಸನಲ್ಲಿ
ಬರಿದೆ ಪ್ರೇಮ ಬೇಡಿದೆ
ಎಂಥ ಹುಚ್ಚು ನನ್ನದು
ಹೃದಯವೆಷ್ಟು ಸಣ್ಣದು
ದಾಹ ಕಳೆವ ದೇವನಲ್ಲಿ
ಗುಟುಕಿಗಾಗಿ ಕಾಡಿದೆ;
ಅವನ ಹರವು ಅರಿಯದೆ
ಒಡಲ ಮೋಹ ಬಿಡದು ಇಲ್ಲಿ
ಮುರಳಿಗಾನ ಕೇಳದೆ
ದಡದ ಹಂಗು ತೀರದಿಲ್ಲಿ
ಒಲವ ನದಿಯು ಹರಿಯದೆ
ಬಯಲು ಎಷ್ಟು ಕರೆದರೂ
ನಿಜದ ಸದ್ದು ಕೇಳದು
ಒಂದು ಹೆಜ್ಜೆಯ ಹಾಕದೆ
ಗೆಜ್ಜೆ ಕಾಲಿಗೆ ಕಟ್ಟಿದೆ;
ಜಗದ ಹೆಮ್ಮೆಯನಪ್ಪಿದೆ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
No comments:
Post a Comment