Saturday 12 September 2015

ಕವಿತೆಯನ್ನು ಯಾಕೆ ಬರೆಯಬೇಕು? ಅದನ್ನು ಯಾಕೆ ಓದಬೇಕು? ಇವೆರಡೂ ಮೂಲ ಪ್ರಶ್ನೆಗಳು. ನಮಗನಿಸಿದ್ದನ್ನ, ನಮ್ಮ ಭಾವುಕತೆಗೆ ಹೊಳೆದದ್ದನ್ನು ಕಡಿಮೆ ಶಬ್ದಗಳಲ್ಲಿ ಇತರರಿಗೆ ದಾಟಿಸುವ ಯತ್ನವೇ ಕವಿತೆ ಎನ್ನಬಹುದು. ಇದೊಂದು ಬಗೆಯಲ್ಲಿ ಒಳಗುದಿಯಿಂದ ಪಾರಾಗುವ, ಒತ್ತಡ ಬಿಟ್ಟು ಹಗುರಾಗುವ ಪ್ರಯತ್ನ. ಕವಿತೆಯೂ ಸಂವಹನದ ಪರಿಣಾಮಕಾರೀ ಮಾಧ್ಯಮ.
 ಇನ್ನು ಓದಿನ ಬಗ್ಗೆ . ಕವಿತೆಯ ಓದು ನಮ್ಮನ್ನ ಇನ್ನಷ್ಟು ಸ್ಪಷ್ಟವಾಗಿಸುತ್ತದೆ. ಸಾವಿರ ವಾಕ್ಯಗಳು ಹೇಳದ ಅರ್ಥವನ್ನು ಕವಿತೆಯ ಒಂದು ಸಾಲು ಮಾಡಿಸುತ್ತದೆ. ಪರಸ್ಪರ ಸಂಬಂಧಗಳ ಆಳವಾಗಿ ಅರಿಯಲು ,ಚಿಂತಿಸಲು ಕವಿತೆಗಿಂತ ಒಳ್ಳೆಯ ಮಾಧ್ಯಮವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದು ಹುಟ್ಟಿಸುವ ಜೀವನಪ್ರೀತಿ ಓದುಗನನ್ನೂ ಕವಿಯನ್ನೂ ಜೀವನ್ಮುಖಿಯಾಗಿಸುತ್ತದೆ.

No comments:

Post a Comment