Thursday 15 September 2011

ಬೇಗ ಬಾ


ಆಡು ಬಾ ಕಾಡು ಬಾ,
ಬೇಸರವ ನೀಗು ಬಾ.
ಮನದ ತುಂಬಾ ಖಾಲಿ ಭಾವ
ತುಂಬು ಬಾ, ನೀ ಬೇಗ ಬಾ.

ಹನಿಗಾಗಿ ಕಾದ ಇಳೆ,ದೂರ ಎಲ್ಲೊ ಸೋನೆ ಮಳೆ
ಭೂಮಿ ಬಾನ ನಡುವೆ ಯಾಕೋ; ತೀರದಿಹ ಹುಸಿ ಮುನಿಸು.

ಹುಣ್ಣಿಮೆಯ ಚಂದ್ರನಿಲ್ಲ, ಆಗಸದಿ ತಾರೆ ಇಲ್ಲ
ಕತ್ತಲ ಮರೆಯೊಳಗೆ ಎಲ್ಲೊ; ಕೇಳದಿಹ ಪಿಸು ಮಾತು.

ಮುಗಿಲಿನ ಬಣ್ಣವೆಲ್ಲ, ಸಾಗರದಿ ಲೀನವಾಗಿ
ಬಿರುಗಾಳಿ ಬಯಲೆಲ್ಲಾ; ಸುಡುತಿಹುದು ತಂಗಾಳಿ.

ಶೂನ್ಯ ಭಾವ ಬಿಡದೆ ಕಾಡಿ, ಉದಯರವಿಗೂ ನಿಶೆಯ ಮೋಡಿ
ಸಮಯ ಸಾಗದಾಗಿದೆ; ನಿನ್ನ ಕನಸೂ ಬಾರದೆ?.



No comments:

Post a Comment