ಕನ್ನಡ ಒಂದೇ ನಮಗೆ
ಹೃದಯಕೆ ಒಪ್ಪುವ ಮಾತು
ಕನ್ನಡ ನೆಲವೆ ನಮಗೆ
ನಮ್ಮ ಅಸ್ಮಿತೆಯ ಗುರುತು
ದೇಶದೇಶಗಳ ಸುತ್ತಿ ಬಂದರೂ
ಬದುಕಲು ಇಲ್ಲಿಯೆ ಇಷ್ಟ
ಕನ್ನಡ ಜನಮನವೇ ಎಂದೂ
ಪರಿಮಳ ಬೀರುವ ಪುಷ್ಪ
ಒಗ್ಗಟ್ಟೆನ್ನುವ ಮಾತೇ ಇಲ್ಲಿ
ಶಾಂತಿಯ ಪಠಿಸುವ ಮಂತ್ರ
ಕನ್ನಡ ಜನ ಒಂದೆನ್ನುವ ಅರಿವೇ
ಸಮತೆಯ ಸಾರುವ ಸೂತ್ರ
ಎಲ್ಲೇ ಇದ್ದರೂ ಹೇಗೆ ಇದ್ದರೂ
ಭಾಷೆಯೆ ನಮ್ಮ ಮನೆ
ಕನ್ನಡ ಸೂರಿನ ಕೆಳಗೇ ನಿಂತರೆ
ಕರ್ನಾಟಕ ತಾನೇ.
~ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
No comments:
Post a Comment