Thursday 17 September 2020

ಕನ್ನಡ


ಕನ್ನಡ ಒಂದೇ ನಮಗೆ
ಹೃದಯಕೆ ಒಪ್ಪುವ ಮಾತು
ಕನ್ನಡ ನೆಲವೆ ನಮಗೆ
ನಮ್ಮ ಅಸ್ಮಿತೆಯ ಗುರುತು


ದೇಶದೇಶಗಳ ಸುತ್ತಿ ಬಂದರೂ
ಬದುಕಲು ಇಲ್ಲಿಯೆ ಇಷ್ಟ
ಕನ್ನಡ ಜನಮನವೇ ಎಂದೂ
ಪರಿಮಳ ಬೀರುವ ಪುಷ್ಪ

ಒಗ್ಗಟ್ಟೆನ್ನುವ ಮಾತೇ ಇಲ್ಲಿ
ಶಾಂತಿಯ ಪಠಿಸುವ ಮಂತ್ರ
ಕನ್ನಡ ಜನ ಒಂದೆನ್ನುವ ಅರಿವೇ
ಸಮತೆಯ ಸಾರುವ ಸೂತ್ರ

ಎಲ್ಲೇ ಇದ್ದರೂ ಹೇಗೆ ಇದ್ದರೂ
ಭಾಷೆಯೆ ನಮ್ಮ ಮನೆ
ಕನ್ನಡ ಸೂರಿನ ಕೆಳಗೇ ನಿಂತರೆ
ಕರ್ನಾಟಕ ತಾನೇ.

~ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment