Thursday 23 July 2015

ಎದೆಯ ಒಲವ ಪಾತ್ರೆ
ಬರಿದಾಗಿದೆ;
ಒಳಗೆಲ್ಲಾ ಭಣ ಭಣ
ಪಸೆಯಿಲ್ಲದ ಮರುಭೂಮಿ.

ನೀನೆದ್ದು ಹೋದ ಮೇಲೆ
ಹೊಸದಾಗಿ ಏನೂ ಬೆಳೆದಿಲ್ಲ;
ಮತ್ತೆ ಹಸನು ಮಾಡಿ ಬಿತ್ತಿದರೂ
ಈ ನೆಲದಲ್ಲಿ
ಮೊಳಕೆಯೊಡೆದೀತು ಅಂತ
ಯಾವ ಖಾತರಿಯೂ ಇಲ್ಲ.

* * * * * * *

ಈ ಬೆಳದಿಂಗಳನ್ನು
ಸ್ವಲ್ಪ ಸ್ವಲ್ಪವೇ ಒಳಗಿಳಿಸಿಕೊಳ್ಳಬೇಕು;
ಬೆಳೆಯುವ ಕಡಿಯುವ
ತೇಪೆ ಹಚ್ಚುವ
ಅದೇ ಅದೇ ಕೆಲಸವನ್ನೆಲ್ಲಾ
ಬೆಳಕಿಗೇ ಬಿಟ್ಟು ಕೊಟ್ಟು.

ಅಷ್ಟಕ್ಕೂ ಬದುಕೆಂದರೆ
ಬರೇ ಇಷ್ಟೇ ಅಲ್ಲವಲ್ಲ;
ಗೋರಿ ತಬ್ಬಿದ ಗಿಡದಲ್ಲೂ
ಹೂ ಅರಳುತ್ತದೆ
ಅಂದ ಮೇಲೆ?.



No comments:

Post a Comment