Thursday 7 February 2013


ಭಾವ ಗೀತೆ.

ನಿವೇದನೆ


ಮನಸಿನೊಳಗಿರೋ ಮಾತೊ೦ದು ಯಾಕೋ
ಬಿಡದೇ ಕಾಡುತಿದೆ,
ಮೌನದ ಪರದೆಯ ಸರಿಸುವ ಮೊದಲೇ
ಕ೦ಗಳು ಸೋಲುತಿವೆ.

ಅರುಣೋದಯದ ಕಿರಣದ ಝರಿಗೆ
ಇಳೆಯ ಮ೦ಜು ಕರಗುವ ಮೊದಲೇ,
ಬಿರುನುಡಿಗಳ ಹಸಿವಿನ ಉರಿಗೆ
ಭಾ೦ದವ್ಯದ ಬೆಸುಗೆ ಒಡೆಯುವ ಮೊದಲೇ,
ಕೊನೆಮೊದಲಿಲ್ಲದ ಇರುಳಿನ ಬಾಳಿಗೆ
ಬೆಳಕನು ಹುಡುಕುತಿದೆ,
ನಿನ್ನ ಕಾಣದೆ ಹುಡುಕುತಿದೆ.

ಕಲೆತು, ಕಳೆದ ದಿನಗಳ ನೆನಪು
ಸಾಗರ ಶಾ೦ತಿಯ ತಲ ಕಲಕಿರಲು,
ಸುಮ್ಮನೆ ಗೀಚಿದ ಪದಗಳ ಸಾಲು
ವಿರಹ ಗೀತೆಗೆ ದ್ವನಿಯಾಗಿರಲು ,
ಒಲುಮೆಯ ಚೈತ್ರಕೆ ನಿನ್ನನೇ ಕರೆಯಲು
ಕೋಗಿಲೆ ಹಾಡುತಿದೆ,
ಮನದ ಕೋಗಿಲೆ ಹಾಡುತಿದೆ.



ರವೀ೦ದ್ರ ನಾಯಕ್

No comments:

Post a Comment