Sunday 26 August 2018

ಎದೆಗೆ ಇಳಿಯಿತು ಒಲವ ಶ್ರಾವಣ
ನೀನು ನಕ್ಕು ನುಡಿಯೆ.
ಕರಗಿ ಹರಿಯಿತು ವಿರಹ ಬೇಸಗೆ
ನಿನ್ನ ಸನಿಹ ಮೆರೆಯೆ

ದಟ್ಟ ಕಾನನದ ಮೌನ ಕಾಡಲು
ನೇಹಕಿರುಳು ಸುರಿಯೆ
ಬಿಸಿಲಕೋಲಿನ ಮಾತಿನೊಲುಮೆಯು
ಬದುಕ ಕದವ ತೆರೆಯೆ

ಮುಗಿಲ‌ ಮನೆಯ ಬಿರುನುಡಿಯ ರಭಸಕೆ
ನಿಂತ ನೆಲವು ಕುಸಿಯೆ
ಮಳೆಯು ನಿಂತ ಹಸಿ ನವಿರು ಬಿಸಿಲಿಗೆ
ಮನದ ಬಣ್ಣ ಸೆಳೆಯೆ

# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


No comments:

Post a Comment